ಶ್ರೀವಿಘ್ನೇಶ್ವರಸಂಧಿ ಶ್ರೀಜಗನ್ನಾಥದಾಸ ವಿರಚಿತ ಶ್ರೀವಿಘ್ನೇಶ್ವರಸಂಧಿ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೇ ಪರಮಭಗವದ್ಭಕ್ತರಿದನಾದರದಿ ಕೇಳುವುದು ॥೧॥ ಶ್ರೀಶನಂಘ್ರಿಸರೋಜಭೃಂಗ ಮ- ಹೇಶಸಂಭವ ಮನ್ಮನದೋಳು ಪ್ರ- ಕಾಶಿಸನುದಿನ ಪ್ರಾರ್ಥಿಸುವೇ ಪ್ರೇಮಾತಿಶಯದಿಂದ ನೀ ಸಲಹು ಸಜ್ಜನರ ವೇದ- ವ್ಯಾಸಕರುಣಾಪಾತ್ರ ಮಹದಾ- ಕಾಶಪತಿ ಕರುಣಾಳು ಕೈಪಿಡಿದೇಮ್ಮನುದ್ಧರಿಸು ॥೨॥ ಏಕದಂತ ಇಭೇಂದ್ರಮುಖ ಚಾ- ಮೀಕರಕೃತಭೂಷಣಾಂಗ ಕೃ- ಪಾಕಟಾಕ್ಷದಿ ನೋಡು ವಿಜ್ಞಾಪಿಸುವೇ ಇನಿತೇಂದು ನೋಕನೀಯನ ತುತಿಸುತಿಪ್ಪ ವಿ- ವೇಕಿಗಳ ಸಹವಾಸಸುಖಗಳ ನೀ ಕರುಣಿಸುವದೇಮಗೇ ಸಂತತ ಪರಮಕರುಣದಲಿ॥೩॥ ವಿಘ್ನರಾಜನೇ ದುರ್ವಿಷಯದೋಳು ಮಗ್ನವಾಗಿಹ ಮನವ ಮಹದೋ- ಷಘ್ನನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ ಲಗ್ನವಾಗಲಿ ನಿತ್ಯ ನರಕಭ- ಯಾಗ್ನಿಗಳಿಗಾನಂಜೇ ಗುರುವರ ಭಗ್ನಗೈಸೇನ್ನವಗುಣಗಳನು ಪ್ರತಿದಿವಸದಲ್ಲಿ॥೪॥ ಧನಪ ವಿಷ್ವಕ್ಸೇನ ವೈದ್ಯಾ- ಶ್ವಿನಿಗಳಿಗೇ ಸರಿಯೇನಿಪ ಷಣ್ಮುಖ- ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ- ವಿನುತ ವಿಶ್ವೋಪಾಸಕನೇ ಸ- ನ್ಮನದಿ ವಿಜ್ಞಾಪಿಸುವೇ ಲಕುಮಿ ವನಿತೇಯರಸನ ಭಕ್ತಿಜ್ಞಾನವ ಕೋಟ್ಟು ಸಲಹುವದು॥೫॥ ಚಾರುದೇಷ್ಣಾಹ್ವಯನೇನಿಸಿ ಅವ- ತಾರ ಮಾಡಿದೇ ರುಗ್ಮಿಣೀಯಲಿ ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ ಶೌರಿಯಾಜ್ಞದಿ ಸಂಹರಿಸಿ ಭೂ- ಭಾರವಿಳುಹಿದ ಕರುಣಿ ತ್ವತ್ಪಾ- ದಾರವಿಂದಕೇ ನಮಿಪೇ ಕರುಣಿಪುದೇಮಗೇ ಸನ್ಮತಿಯ॥೬॥ ಶೂರ್ಪಕರ್ಣದ್ವಯ ವಿಜಿತಕಂ- ದರ್ಪಶರ ಉದಿತಾರ್ಕಸನ್ನಿಭ ಸರ್ಪವರಕಟಿಸೂತ್ರ ವೈಕೃತಗಾತ್ರ ಸುಚರಿತ್ರ ಸ್ವರ್ಪಿತಾಂಕುಶಪಾಶಕರ ಖಳ- ದರ್ಪಭಂಜನ ಕರ್ಮಸಾಕ್ಷಿಗ ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ॥೭॥ ಖೇಶ ಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು ಪ್ರ- ಯಾಸವಿಲ್ಲದೇ ಬರೇದು ವಿಸ್ತರಿಸಿದೇಯೋ ಲೋಕದೋಳು ಪಾಶಪಾಣಿಯೇ ಪ್ರಾರ್ಥಿಸುವೇ ಉಪ- ದೇಶಿಸೇನಗದರರ್ಥಗಳ ಕರು- ಣಾಸಮುದ್ರ ಕೃಪಾಕಟಾಕ್ಷದಿ ನೋಡು ಪ್ರತಿದಿನದಿ॥೮॥ ಶ್ರೀಶನತಿನಿರ್ಮಲಸುನಾಭೀ- ದೇಶವಸ್ಥಿತ ರಕ್ತಶ್ರೀಗಂ- ಧಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ ಮೂಷಕಾಸುರವಹನ ಪ್ರಾಣಾ- ವೇಶಯುತ ಪ್ರಖ್ಯಾತ ಪ್ರಭು ಪೂ- ರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿದಿನದಿ॥೯॥ ಶಂಕರಾತ್ಮಜ ದೈತ್ಯರಿಗತಿಭ- ಯಂಕರ ಗತಿಗಳೀಯಲೋಸುಗ ಸಂಕಟಚತುರ್ಥಿಗನೇನಿಸಿ ಅಹಿತಾರ್ಥಗಳ ಕೋಟ್ಟು ಮಂಕುಗಳ ಮೋಹಿಸುವೇ ಚಕ್ರದ- ರಾಂಕಿತನೇ ದಿನದಿನದಿ ತ್ವತ್ಪದ- ಪಂಕಜಗಳಿಗೇ ಬಿನ್ನಯಿಸುವೇನು ಪಾಲಿಪುದು ಏಮ್ಮ ॥೧೦॥ ಸಿದ್ಧವಿದ್ಯಾಧರ ಗಣಸಮಾ- ರಾಧ್ಯಚರಣಸರೋಜ ಸರ್ವಸು- ಸಿದ್ಧಿದಾಯಕ ಶೀಘ್ರದಿಂ ಪಾಲಿಪುದು ಬಿನ್ನಯಿಪೇ ಬುದ್ಧಿವಿದ್ಯಾಜ್ಞಾನಬಲ ಪರಿ- ಶುದ್ಧಭಕ್ತಿವಿರಕ್ತಿ ನಿರುತನ- ವದ್ಯನ ಸ್ಮೃತಿಲೀಲೇಗಳ ಸುಸ್ತವನ ವದನದಲಿ॥೧೧॥ ರಕ್ತವಾಸದ್ವಯ ವಿಭೂಷಣ ಉಕ್ತಿ ಲಾಲಿಸು ಪರಮಭಗವ- ದ್ಭಕ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ ಸಕ್ತವಾಗಲಿ ಮನವು ವಿಷಯವಿ- ರಕ್ತಿ ಪಾಲಿಸು ವಿದ್ವದಾದ್ಯ ವಿ- ಮುಕ್ತನೇಂದೇನಿಸೇನ್ನ ಭವಭಯದಿಂದಲನುದಿನದಿ॥೧೨॥ ಶುಕ್ರಶಿಷ್ಯರ ಸಂಹರಿಪುದಕೇ ಶಕ್ರ ನಿನ್ನನು ಪೂಜಿಸಿದನು ಉ- ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ ಚಕ್ರವರ್ತೀಪ ಧರ್ಮರಾಜನು ಚಕ್ರಪಾಣಿಯ ನುಡಿಗೇ ಭಜಿಸಿದ ವಕ್ರತುಂಡನೇ ನಿನ್ನೋಳೇಂತುಟೋ ಈಶನುಗ್ರಹವು ॥೧೩॥ ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ ಸಂ- ಹಾರವೈದಿದ ಗುರುವರ ವೃಕೋದರನ ಗದೇಯಿಂದ ತಾರಕಾಂತಕನನುಜ ಏನ್ನ ಶ- ರೀರದೋಳು ನೀ ನಿಂತು ಧರ್ಮ- ಪ್ರೇರಕನು ನೀನಾಗಿ ಸಂತೈಸೇನ್ನ ಕರುಣದಲಿ॥೧೪॥ ಏಕವಿಂಶತಿಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೇ ಕೃ- ಪಾಕರೇಶ ಕೃತಜ್ಞ ಕಾಮದ ಕಾಯೋ ಕೈಪಿಡಿದು ಲೇಖಕಾಗ್ರಣಿ ಮನ್ಮನದ ದು- ರ್ವ್ಯಾಕುಲವ ಪರಿಹರಿಸು ದಯದಿ ಪಿ- ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೇ ನಿನ್ನ॥೧೫॥ ನಿತ್ಯಮಂಗಳಚರಿತ ಜಗದು- ತ್ಪತ್ತಿಸ್ಥಿತಿಲಯನಿಯಮನ ಜ್ಞಾ- ನತ್ರಯಪ್ರದ ಬಂಧಮೋಚಕ ಸುಮನಸಾಸುರರ ಚಿತ್ತವೃತ್ತಿಗಳಂತೇ ನಡೇವ ಪ್ರ- ಮತ್ತನಲ್ಲ ಸುಹೃಜ್ಜನಾಪ್ತನ ನಿತ್ಯದಲಿ ನೇನೇ ನೇನೇದು ಸುಖಿಸುವ ಭಾಗ್ಯ ಕರುಣಿಪುದು॥೧೬॥ ಪಂಚಭೇದಜ್ಞಾನವರುಪು ವಿ- ರಿಂಚಿಜನಕನ ತೋರು ಮನದಲಿ ವಾಂಛಿತಪ್ರದ ಓಲುಮೇಯಿಂದಲಿ ದಾಸನೇಂದರಿದು ಪಂಚವಕ್ತ್ರನ ತನಯ ಭವದೋಳು ವಂಚಿಸದೇ ಸಂತೈಸು ವಿಷಯದಿ ಸಂಚರಿಸದಂದದಲಿ ಮಾಡು ಮನಾದಿಕರಣಗಳ॥೧೭॥ ಏನು ಬೇಡುವದಿಲ್ಲ ನಿನ್ನ ಕು- ಯೋನಿಗಳು ಬರಲಂಜೇ ಲಕಮಿ- ಪ್ರಾಣಪತಿ ತತ್ತ್ವೇಶರಿಂದೋಡಗೂಡಿ ಗುಣಕಾರ್ಯ ತಾನೇ ಮಾಡುವನೇಂಬ ಈ ಸು- ಜ್ಞಾನವನೇ ಕರುಣಿಸುವದೇಮಗೇ ಮ- ಹಾನುಭಾವ ಮುಹುರ್ಮುಹುಃ ಪ್ರಾರ್ಥಿಸುವೇ ಇನಿತೇಂದು ॥೧೮॥ ನಮೋ ನಮೋ ಗುರುವರ್ಯ ವಿಬುಧೋ- ತ್ತಮ ವಿವರ್ಜಿತನಿದ್ರ ಕಲ್ಪ- ದ್ರುಮನೇನಿಪೇ ಭಜಕರಿಗೇ ಬಹುಗುಣಭರಿತ ಶುಭಚರಿತ ಉಮೇಯ ನಂದನ ಪರಿಹರಿಸಹಂ- ಮಮತೇ ಬುಧ್ದ್ಯಾದಿಂದ್ರಿಯಗಳಾ- ಕ್ರಮಿಸಿ ದಣಿಸುತಲಿಹವು ಭವದೋಳಗಾವಕಾಲದಲಿ॥೧೯॥ ಜಯಜಯತು ವಿಘ್ನೇಶ ತಾಪ- ತ್ರಯವಿನಾಶನ ವಿಶ್ವಮಂಗಳ ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ ಜಯ ಜಯತು ಚಾರ್ವಂಗ ಕರುಣಾ- ನಯನದಿಂದಲಿ ನೋಡಿ ಜನುಮಾ- ಮಯ ಮೃತಿಗಳನು ಪರಿಹರಿಸು ಭಕ್ತರಿಗೇ ಭವದೋಳಗೇ॥೨೦॥ ಕಡುಕರುಣಿ ನೀನೇಂದರಿದು ಹೇ- ರೋಡಲ ನಮಿಸುವೇ ನಿನ್ನಡಿಗೇ ಬೇಂ- ಬಿಡದೇ ಪಾಲಿಸು ಪರಮಕರುಣಾಸಿಂಧು ಏಂದೇಂದು ನಡುನಡುವೇ ಬರುತಿಪ್ಪ ವಿಘ್ನವ ತಡೇದು ಭಗವನ್ನಾಮ ಕೀರ್ತನೇ ನುಡಿದು ನುಡಿಸೇನ್ನಿಂದ ಪ್ರತಿದಿವಸದಲಿ ಮರೇಯದಲೇ ॥೨೧॥ ಏಕವಿಂಶತಿ ಪದಗಳೇನಿಸುವ ಕೋಕನದ ನವಮಾಲಿಕೇಯ ಮೈ- ನಾಕಿತನಯಾಂತರ್ಗತಶ್ರೀಪ್ರಾಣಪತಿಯೇನಿಪ ಶ್ರೀಕರ ಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ ತಾ ಕೋಡುವ ಸೌಖ್ಯಗಳ ಭಕ್ತರಿಗಾವಕಾಲದಲಿ॥೨೨॥